Sunday, June 27, 2010

ರೆಡ್ಡಿಯೂರಪ್ಪನವರ exclusive ಸಾಧನೆ!!!

ರೆಡ್ಡಿಯೂರಪ್ಪನವರು ತಮ್ಮ (ಸರ್ಕಾರದಲ್ಲ) ಎರಡು ವರ್ಷದ ಮಹಾನ್ ಸಾಧನೆಯ ಬಗ್ಗೆ ಮೊನ್ನೆ ಸಾಧನ ಸಮಾವೇಶದಲ್ಲಿ ಆನಂದಭಾಷ್ಪದೊಂದಿಗೆ ಆಡಿದ ನುಡಿಮುತ್ತುಗಳಲ್ಲಿ ಒಂದು ಮುತ್ತು(ರೇಣು ಮುತ್ತು ಅಲ್ಲ) ಇಲ್ಲಿದೆ: (exclusively on ತಲೆಹರಟೆ)

..... ಇದುವರೆಗೂ ಯಾವ ಮುಖ್ಯ, ಅಮುಖ್ಯ ಮಂತ್ರಿ, ಕಂತ್ರಿ, ಬೋರೆಗೌಡ, ಹನುಮೆಗೌಡ,ತಿಮ್ಮೆಗೌಡನಾಗಲಿ ಮಾಡದಂತಹ ಸಾಧನೆಯನ್ನು ನಾನು ಮಾಡಿದ್ದೇನೆ.

ಇದುವರೆಗು ನಮ್ಮ ಅಧಿಕಾರಿವರ್ಗಕ್ಕೆ ಸುಸೂತ್ರವಾಗಿ ವ್ಯವಹಾರ ಮಾಡಲು ಅಡ್ಡಿಯಾಗಿದ್ದ ಖಡಕ್ ಹೆಗ್ಡೆಯವರು ರಾಜಿನಾಮೆ ನೀಡುವಂತೆ ಮಾಡಿದ್ದೇನೆ. ಅಧಿಕಾರಿಗಳು ಭಯದ ನೆರಳಲ್ಲಿ ಕೆಲಸಮಾಡಲು ಆಗುವುದಿಲ್ಲ. ಆಗ ಅಭಿವೃದ್ದಿ ಕುಂಟುತ್ತದೆ. ನಮ್ಮ ಅಭಿವೃದ್ಧಿಯೂ ಆಗುವುದಿಲ್ಲ.

ನಾವು ಎಲ್ಲದರಲ್ಲೂ ನಂಬರ್ 1 ಸ್ಥಾನದಲ್ಲಿರಬೇಕು. ಭ್ರಷ್ಟಾಚಾರದಲ್ಲೂ ಸಹ. ಭ್ರಷ್ಟಾಚಾರ ಬಹಳ ಕೆಟ್ಟದು ಹಾಗೆ ಹೀಗೆ ಎಂದು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಈಗ ಭ್ರಷ್ಟಾಚಾರ ಮೊಬೈಲ್, ಟಿವಿ ಹಾಗೆ ಜೀವನದ ಒಂದು ಭಾಗ ಆಗಿರುವಾಗ ಅದು ಹೇಗೆ ಕೆಟ್ಟದ್ದು? ಪ್ರಪಂಚದ ಹಳೇ ವೃತ್ತಿಯಾದ ವೇಶ್ಯಾವೃತ್ತಿಯನ್ನು ಹೇಗೆ ನಿರ್ಮೂಲನೆ ಮಾಡಲಾಗುವುದಿಲ್ಲವೋ, ಅದೇ ರೀತಿ ಅಷ್ಟೇ ಹಳೆಯಾದಾದ ಭ್ರಷ್ಟಾಚಾರವನ್ನೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅದರೊಂದಿಗೆ ಸಹಜೀವನ ನಡೆಸುವುದನ್ನು ನಾವು ಕಲಿಯಬೇಕು. ಭ್ರಷ್ಟಾಚಾರವಿಲ್ಲದೆ ಈ ದುಬಾರಿ ಕಾಲದಲ್ಲಿ ನಾವು ಸರ್ಕಾರಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ.......

(ದಯವಿಟ್ಟು ಕ್ಷಮಿಸಿ, ಇದು ತಮಾಷೆಗಲ್ಲ...)

1 Comments:

Anonymous Anonymous said...

Link on this news please

12:46 PM  

Post a Comment

<< Home