Friday, February 09, 2007

Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!

ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ.

ಈ ಮಧ್ಯೆ, ಕಾವೇರಿಗೆ ಸಂಬಂಧಿಸಿದ ಕರ್ನಾಟಕದೊಂದಿಗಿನ ತನ್ನ ವ್ಯಾಜ್ಯಕ್ಕೆ 'ಪರಿಹಾರ' ದೊರೆತ ನಂತರ ತಮಿಳುನಾಡಿನಲ್ಲಿ ಅಲ್ಲಿಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗಳ ಮದ್ಯೆ ಇದೇ ವಿಷಯ ಹೋಸ ತಿರುವು ಪಡೆದುಕೊಂಡಿದೆ. ಕಾವೇರಿ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದು 'ಮಾಜಿ'ಯು ತರಲೆ ತೆಗೆದಿರುವುದಕ್ಕೆ 'ಹಾಲಿ'ಯು, " 'ದೊಡ್ಡ' ಜನರಿಗೆ ಎಷ್ಟು ಕೊಟ್ಟರು ಸಾಲುವುದಿಲ್ಲ. ಮಾಜಿಯ ತಗಾದೆಯನ್ನು ಜೋಕ್ ಆಗಿ ತೆಗೆದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ 'ದೊಡ್ಡ' ಪದವು ಮಾನಸಿಕ ಅರ್ಥದಲ್ಲಿ ಬಳಕೆಯಾಗಿದೆಯೋ ಅಥವ 'ದೈಹಿಕ' ಅರ್ಥದಲ್ಲಿ ಬಳಕೆಯಾಗಿದಿಯೋ ಎಂಬುದು ಇದುವರಗೆ ತಿಳಿದು ಬಂದಿಲ್ಲ.

5 Comments:

Blogger Shiv said...

ತಲೆಹರಟೆ ಅವರೇ,

ಬಹುಷಃ ಗೌಡ್ರ ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಗಿರಬಹುದೇ??

ಅಲ್ಲಿ ತ.ನಾಡಲ್ಲಿ ಒಮ್ಮೆ ಮಾಜಿ ಒಮ್ಮೆ ಹಾಲಿ ಆಟ ನಡೆದೆ ಇರುತ್ತೆ..ನೀವು ಯಾರು ಹಾಲಿ ಯಾರು ಮಾಜಿ ಅನ್ನೋದು ಹೇಳುವುದು

9:18 PM  
Anonymous Anonymous said...

hard disk gowda! Ha ha ha ha! that was the crack of the year !

--------------------
http://quillpad.in/kannada/
The one true Indian site to Offer Kannada language solutions with middle english options.
Fast, Reliable and comfortable! Intuitive! :-)

4:36 AM  
Blogger Unknown said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

10:57 PM  
Blogger Sridhar Raju said...

ನಮಸ್ಕಾರ ,


ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,
-ಶ್ರೀಧರ

7:38 PM  
Blogger Unknown said...

ಪ್ರಿಯ ಆತ್ಮೀಯ ಸ್ನೇಹಿತರೆ,

ನಿಮ್ಮ ಅಂತರ್ಜಾಲ ತಲೆ ಹರಟೆ & ಓಲೆ ಗರಿ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ - kannadajokes@gmail.com

ಧನ್ಯವಾದಗಳೊಂದಿಗೆ.....

3:28 AM  

Post a Comment

<< Home